
31 Jul 2025
ಮುರುಘಾ ಗುರುಪರಂಪರೆಯ 5ನೆಯ ಪೀಠಾಧಿಪತಿಗಳಾಗಿದ್ದ ನಾಯಕನಹಟ್ಟಿ(ದೊಡ್ಡ) ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನ ಚಿಂತನ ನಡೆಯಿತು.
ಇಂದು ಮುರುಘಾ ಗುರುಪರಂಪರೆಯ 5ನೆಯ ಪೀಠಾಧಿಪತಿಗಳಾಗಿದ್ದ ನಾಯಕನಹಟ್ಟಿ(ದೊಡ್ಡ) ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ , ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆ 8ಗಂಟೆಯಿಂದ ಮೂಲ ಕರ್ತೃವಿನ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು.
ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ,ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ,ಭಕ್ತರು,ಆಭಿಮಾನಿಗಳು,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಹೂವಿನಮಡುವಿನ ಶ್ರೀ ಹೆಚ್.ಎಸ್.ಹಿರೇಮಠ ಹಾಗೂ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿಯವರು ಸೇವಾಕರ್ತರಾಗಿದ್ದರು.