top of page

2 Aug 2025
ಇಂದು ಮುರುಘಾ ಗುರುಪರಂಪರೆಯ ಮೂರು ಸಾವಿರದ ಶ್ರೀ ಸಿದ್ಧಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ , ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು.ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ
ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ,ಭಕ್ತರು,ಆಭಿಮಾನಿಗಳು,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಶ್ರೀ ಜಗದ್ಗುರು ಮುರುಘರಾಜೇಂದ್ರ ಪದವಿ ಮಹಾವಿದ್ಯಾಲಯದ ಅಧ್ಯಾಪಕರಾದ ಶ್ರೀ ವಿಶ್ವನಾಥ .ಸಿ.ಎಂ. ವಿಷಯಾವಲೋಕನ ನಡೆಸಿಕೊಟ್ಟರು.ನಗರದ ಶ್ರೀಮತಿ ಗಂಗಬಿಕಾ ಮಕ್ಕಳು,ಮಠದ ಕುರುಬರಹಟ್ಟಿಯ ಶ್ರೀಶಿವಯೋಗಿ ಕುಟುಂಬ, ಬೆಂಗಳೂರಿನ ಕುಟುಂಬದವರು ಇಂದಿನ ಸೇವಾಕರ್ತರಾಗಿದ್ದರು.
bottom of page