top of page

ಯೋಗ ಶಿಬಿರ : 2ನೇ ದಿನ

26 Sept 2024

ಚಿತ್ರದುರ್ಗ: ಸೆ. 26- ಯೋಗವು ಒಂದು ಕಲೆ. ಈ ಕಲೆಯನ್ನು ಸರ್ವರೂ ಕರಗತಮಾಡಿಕೊಳ್ಳಬೇಕು ಎಂದು ಯೋಗಗುರು ವೈದ್ಯ ಶ್ರೀ ಚೆನ್ನಬಸವಣ್ಣ ತಿಳಿಸಿದರು.
ಶರಣಸಂಸ್ಕೃತಿ ಉತ್ಸವ-2024ರ ನಿಮಿತ್ಯವಾಗಿ ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿನ ಅನುಭವ ಮಂಟಪದಲ್ಲಿ ನಡೆಯುವ ಯೋಗ, ಆರೋಗ್ಯ, ಆಧ್ಯಾತ್ಮ ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯೋಗವು ಒಂದು ಕಲೆಯಾಗಿದೆ. ಅಲ್ಲಿ ನಿಮ್ಮ ದೇಹವು ನಿಮ್ಮ ಆತ್ಮವನ್ನು ಸಂಧಿಸುತ್ತದೆ. ಸಂಸ್ಕೃತದಿಂದ ಹುಟ್ಟಿಕೊಂಡ ಪದವು ದೈವಿಕದೊಂದಿಗೆ ಒಕ್ಕೂಟ ಎಂದು ಹೇಳುತ್ತದೆ. ಇದು ಕುಂಡಲಿನಿ ಎಂದು ಕರೆಯಲ್ಪಡುವ ಆಧ್ಯಾತ್ಮಿಕ ಶಕ್ತಿಯನ್ನು ತಮ್ಮ ಸ್ವಂತ ಜೀವ ಶಕ್ತಿಯ ಮೇಲೆ ಅಭ್ಯಾಸ ಮಾಡುವವರಿಗೆ ನಿಯಂತ್ರಣವನ್ನು ತರುವ ದೈವಿಕ ಅಭ್ಯಾಸವಾಗಿದೆ. ಯೋಗವು ಸ್ಟೆಚಿಂಗ್ ವ್ಯಾಯಾಮಗಳಿಗೆ ಸೀಮಿತವಾಗಿಲ್ಲ: ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನವುಗಳಿವೆ. ಧ್ಯಾನವೂ ಯೋಗದ ಪ್ರಮುಖ ಅಂಶವಾಗಿದೆ. ನೀವು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮನ್ನು ಸಮರ್ಪಕವಾಗಿ ಸಿದ್ಧಪಡಿಸಿಕೊಳ್ಳಿ ಮತ್ತು ನಿಮ್ಮ ಯೋಗ ಧ್ಯಾನವು ತುಂಬಾ ಪ್ರಯೋಜನಕಾರಿ ಅನುಭವವಾಗಿರುತ್ತದೆ. ಎಂದು ತಿಳಿಸಿದರು.
ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ, ಯೋಗವು ಅಭ್ಯಾಸವೆ? ಅಭ್ಯಾಸವು ಯೋಗವೆ ಅಯ್ಯಾ?, ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ?, ಯೋಗವ ನುಡಿವರೆ ಅಯ್ಯಾ?, ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ, ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ವಚನದ ಮೂಲಕ ಯೋಗದ ಮಹತ್ವವನ್ನು ತಿಳಿಸಿದರು. ಅಲ್ಲದೇ ಪ್ರಸ್ತುತ ದಿನಮಾನದ ಈ ಜಂಜಾಟದ ಜೀವನದಲ್ಲಿ ಸರ್ವರಿಗೂ ಯೋಗ, ಆಧ್ಯಾತ್ಮ ಹಾಗೂ ಆರೋಗ್ಯ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮವು ಬೆಳಿಗ್ಗೆ 5.30 ಕ್ಕೆ ಜಮುರಾ ಕಲಾತಂಡದವರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ 7 ಗಂಟೆಯವರಿಗೆ ನಡೆಯಿತು. ಡಾ. ಕೊಟ್ರೇಶ ಎಂ. ಸ್ವಾಗತಿಸಿದರು. ವೈದ್ಯಕೀಯ ವಿದ್ಯಾರ್ಥಿನಿ ಕು.ಅಪೂರ್ವ ನಿರೂಪಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page