
Sean Michaels
11 Jun 2024
ಬಸವಕೇಂದ್ರ ಶ್ರೀ ಮುರುಘಾಮಠ, ಚಿತ್ರದುರ್ಗ. ಕಳೆದ 26 ವರ್ಷಗಳಿಂದ ಪ್ರಾಥಮಿಕ ಹಂತದಿಂದ ಪದವಿ
ತರಗತಿಗಳವರೆಗೆ ರಾಜ್ಯ ಮಟ್ಟದ ವಚನ ಕಮ್ಮಟ ಪರೀಕ್ಷೆಗಳನ್ನು ನಡೆಸುತ್ತಿದೆ. 2023-24ನೇ ಸಾಲಿನಲ್ಲಿ ನಡೆದ ಪರೀಕ್ಷೆಗಳ
ಫಲಿತಾಂಶವನ್ನು ಪರೀಕ್ಷಾ ನಿರ್ದೆಶಕರಾದ, ಶ್ರೀ ವೀರಭದ್ರಪ್ಪನವರು ಬಿಡುಗಡೆ ಮಾಡಿದ್ದಾರೆ.
5ನೇ ತರಗತಿ ರ್ಬ್ಯಾಂಕ್ ವಿಜೇತರು
ಭಗತ್ ಸಿಂಗ್. ಕಾಡಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಶಿರೋಳ, ಬಾಗಲಕೋಟೆ-ಜಿಲ್ಲೆ (ಪ್ರಥಮ), ಹೇಮಲತ, ಭಾರತಮಾತ ಆಂಗ್ಲ ಮಾಧ್ಯಮ ಶಾಲೆ, ತುಮಕೂರು-ಜಿಲ್ಲೆ(ದ್ವಿತೀಯ), ತಮನ್ವಿ, ಎಸ್.ಜೆ.ಎಂ. ಹಿರಿಯ ಪ್ರಾಥಮಿಕ ಪ್ರಾಥಮಿಕ ಶಾಲೆ, ಮಂಡಿಮಠ,ಚಳ್ಳಕೆರೆ, ಚಿತ್ರದುರ್ಗ-ಜಿಲ್ಲೆ (ತೃತೀಯ).
6ನೇ ತರಗತಿ
ಸ್ನೇಹ. ವಿ. ಎಸ್.ಜೆ.ಎಂ. ಹಿರಿಯ ಪ್ರಾಥಮಿಕ ಶಾಲೆ, ಭರಮಸಾಗರ, ಚಿತ್ರದುರ್ಗ-ಜಿಲ್ಲೆ (ಪ್ರಥಮ), ಸ್ತುತಿ.ಎಸ್. ವಿದ್ಯಾರಣ್ಯ ಹಿರಿಯ ಪ್ರಾಥಮಿಕ ಶಾಲೆ, ಸಾಗರ, ಶಿವಮೊಗ್ಗ(ದ್ವಿತೀಯ), ಕುಸುಮ. ಸಿ, ಎಸ್.ಜೆ.ಎಂ. ರೆಸಿಡೆನ್ಸಿಯಲ್ ಶಾಲೆ ಎಂ.ಕೆ.ಹಟ್ಟಿ, ಚಿತ್ರದುರ್ಗ (ತೃತೀಯ).
7ನೇ ತರಗತಿ
ಇಂಚರಾ. ವಿ. ವಿಜಯ ಭಾರತಿ ವಿದ್ಯಾಲಯ ಗಿರಿನಗರ, ಬೆಂಗಳೂರ, (ಪ್ರಥಮ), ಸೌಮ್ಯ. ಪಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಬನ್ನಿಗೋಳ, ಕೊಪ್ಪಳ-ಜಿಲ್ಲೆ (ದ್ವಿತೀಯ), ನಿಷ್ಕಾ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿರಿಯಾರ. ಉಡುಪಿ-ಜಿಲ್ಲೆ (ತೃತೀಯ).
8ನೇ ತರಗತಿ
ಕೀರ್ತಿ.ವೈ.ಅಡಪದ. ಶ್ರೀ ಜಗದ್ಗುರು ಅನ್ನದಾನೇಶ್ವರ ವಿದ್ಯಾಲಯ ಸಮಿತಿ ಪ್ರೌಢಶಾಲೆ, ನರಸಾಪುರ, ಗದಗ-ಜಿಲ್ಲೆ
(ಪ್ರಥಮ), ಶಿವಲೀಲಾ ಎಸ್.ಎಂ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಬನ್ನಿಗೋಳ, ಕೊಪ್ಪಳ-ಜಿಲ್ಲೆ
(ದ್ವಿತೀಯ), ಅಮೀನಾ.ಜೆ. ಶ್ರೀ ಬಕ್ಕೇಶ್ವರ ಪ್ರೌಢಶಾಲೆ, ದಾವಣಗೆರೆ (ತೃತೀಯ).
9ನೇ ತರಗತಿ
ಅಕ್ಷತಾ.ಆರ್. ಎಸ್.ಜೆ.ಎಂ. ಪ್ರೌಢಶಾಲೆ, ತ್ಯಾವಣಿಗೆ, ದಾವಣಗೆರೆ (ಪ್ರಥಮ), ಸಿಂಚನ.ಎಸ್.ಡಿ. ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ, ಎಂ.ಸಿ.ಸಿ.ಎ.ಬ್ಲಾಕ್, ದಾವಣಗೆರೆ (ದ್ವಿತೀಯ), ರಾಶಿ.ಎಂ.ಸಿ. ಎಸ್.ಜೆ.ಎಂ.ಪ್ರೌಢಶಾಲೆ, ಸೋಮವಾರಪೇಟೆ, ಕೊಡಗು-ಜಿಲ್ಲೆ (ತೃತೀಯ)
10ನೇ ತರಗತಿ
ರಕ್ಷಿತಾ.ಹೆಚ್.ಕೆ. ರುದ್ರೇಶ್ವರ ಪ್ರೌಢಶಾಲೆ, ಹೆಬ್ಬಾಳು, ದಾವಣಗೆರೆ-ಜಿಲ್ಲೆ (ಪ್ರಥಮ). ಅನುಶ್ರೀ.ಕೆ.ಎಸ್. ಎಸ್.ಜೆ.ಎಂ.ರೆಸಿಡೆನ್ಸಿಯಲ್ ಶಾಲೆ, ಎಂ.ಕೆ.ಹಟ್ಟಿ, ಚಿತ್ರದುರ್ಗ-ಜಿಲ್ಲೆ. (ದ್ವಿತೀಯ). ಲಕ್ಷ್ಮೀ ಬ ಚಳ್ಳಣ್ಣನವರ್ ಎಸ್.ಜೆ.ಜೆ.ಎಂ. ಸಂಯುಕ್ತ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ) (ತೃತೀಯ).
ಪ್ರಥಮ ಪಿಯುಸಿ
ವೈಷ್ಣವಿ ಎಸ್ ಬಿರಾದಾರ ಕೆ.ಎಲ್.ಇ. ಸಂಸ್ಥೆಯ ಮಂಗರೂಳೆ ಜೂನಿಯರ್ ಕಾಲೇಜು, ಅಕ್ಕಲಕೋಟೆ, ಸೊಲ್ಲಪುರ- ಜಿಲ್ಲೆ.. ಮಹಾರಾಷ್ಟ್ರ (ಪ್ರಥಮ), ಜ್ಯೋತಿ ಶ್ರೀ ಕಂಬಾರ ವಿಜಯ ಪದವಿ ಪೂರ್ವ ಕಾಲೇಜು, ಮುಲ್ಕಿ, ದಕ್ಷಿಣಕನ್ನಡ (ದ್ವಿತೀಯ). ಇಶರತ್ ಭಾನು ದಲ್ಯಾತ್ ಎಫ್.ಎಂ.ದಬಾಲಿ ಪದವಿ ಪೂರ್ವ ಕಾಲೇಜು ಶಿರಹಟ್ಟಿ, ಗದಗ-ಜಿಲ್ಲೆ (ತೃತೀಯ).
ದ್ವಿತೀಯ ಪಿಯುಸಿ
ಈರಯ್ಯ ಬ ನಿಂಗೊಳ್ಳಿ ಬಸವೇಶ್ವರ ವಾಣಿಜ್ಯ ಕಾಲೇಜು, ಬಾಗಲಕೋಟೆ-ಜಿಲ್ಲೆ (ಪ್ರಥಮ), ಭವ್ಯ .ಹೆಚ್.ಆರ್ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ತುರುವೇಕೆರೆ, ತುಮಕೂರು-ಜಿಲ್ಲೆ (ದ್ವಿತೀಯ). ಭಾಗ್ಯಲಕ್ಷ್ಮೀ ಗುಡ್ಡಪ್ಪ ನಾಯಕ, ಎಸ್.ಜೆ.ಎಂ ಮಹಿಳಾ ಪದವಿ ಪೂರ್ವ ಕಾಲೇಜು, ರಾಣೇಬೆನ್ನೂರು, ಹಾವೇರಿ-ಜಿಲ್ಲೆ (ತೃತೀಯ)
ಪ್ರಥಮ ಪದವಿ
ಸೃಷ್ಟಿ ಅಲೆಗಾವಿ ಎಸ್.ಬಿ.ಕಲಾ ಮತ್ತು ಕೆ.ಸಿ.ಸಿ ವಿಜ್ಞಾನ ಕಾಲೇಜು, ವಿಜಯಪುರ(ಪ್ರಥಮ). ಜಯಲಕ್ಷ್ಮಿ.ಹೆಚ್.ವಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್, ತುಮಕೂರು (ದ್ವಿತೀಯ) ಜ್ಯೋತಿ.ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದೊಡ್ಡಬಳ್ಳಾಪುರ, ಬೆಂಗಳೂರು-ಜಿಲ್ಲೆ. (ತೃತೀಯ).
ದ್ವಿತೀಯ ಪದವಿ
ತೇಜಸ್ವಿನಿ ಶ್ರೀ ಮೇಟಿ ಬಿ.ವಿ.ವಿ. ಸಂಘದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, ಬಾಗಲಕೋಟೆ-ಜಿಲ್ಲೆ (ಪ್ರಥಮ), ಸಿಂಧೂ.ಎನ್.ಬಿ. ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು ಶಿವಮೊಗ್ಗ-ಜಿಲ್ಲೆ (ದ್ವಿತೀಯ). ಸ್ವಾತಿ.ಜಿ. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯ ಸದಾಶಿವ ನಗರ, ಬೆಂಗಳೂರು (ತೃತೀಯ).
ತೃತೀಯ ಪದವಿ
ಲಕ್ಷ್ಮೀ ರಾ ಬಿರಾದಾರ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತ್ತು ವಿ.ವಿ. ಸಾಲಿಮಠ ವಿಜ್ಞಾನ ಕಾಲೇಜು ಸಿಂಧಗಿ, ವಿಜಯಪುರ(ಪ್ರಥಮ), ನಿತ್ಯಶ್ರೀ ಎನ್. ಕೆ.ಎಲ್.ಇ.ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜು, ರಾಜಾಜಿನಗರ, ಬೆಂಗಳೂರು (ದ್ವಿತೀಯ), ಚೇತನ.ಜೆ. ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಡೆಂಟಲ್ ಕಾಲೇಜು ಆವರಣ, (ತೃತೀಯ).
ಅಧ್ಯಕ್ಷರ ಅಭಿನಂದನೆ
ರಾಂಕ್ ಪಡೆದ ಎಲ್ಲರಿಗೂ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ ರವರು ಅಭಿನಂದಿಸಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣವು ಭಾವೀ ಬದುಕಿಗೆ ಪ್ರೇರಕವಾದುದು. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ತೆಗೆದು ಕೊಳ್ಳಲು ಪ್ರೇರೇಪಿಸಿದ ಖಾಸಗಿ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು ಶಿಕ್ಷಕ ಹಾಗೂ ಶಿಕ್ಷಕೇತರರ ಸಹಕಾರವನ್ನು ಅಧ್ಯಕ್ಷರು ಶ್ಲಾಘಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರವೇಶ:
2024-25ನೇ ಸಾಲಿನಲ್ಲಿ ನಡೆಯುವ ವಚನ ಕಮ್ಮಟ ಪರೀಕ್ಷೆಗಳನ್ನು ತೆಗೆದು ಕೊಳ್ಳಬಯಸುವವರಿಗೆ ಆಗಸ್ಟ್ 31ರವರೆಗೆ ಕಾಲಾವಕಾಶವಿದ್ದು, ಆಸಕ್ತರು ನಿರ್ದೇಶಕರು, ವಚನಕಮ್ಮಟ ವಿಭಾಗ, ಶ್ರೀ ಮುರುಘಾಮಠ, ಎಂ.ಕೆ.ಹಟ್ಟಿ, ಚಿತ್ರದುರ್ಗ-577502.. ಮಾಹಿತಿಗಾಗಿ ದೂ-, 9480422804, ಸಂಪರ್ಕಿಸಬಹುದಾಗಿದೆ.



